ಗ್ರಂಥ ಕರ್ತೃ- ಪರಿಚಯ

ಹರಿದಾಸ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒ೦ದು ಪ್ರಮುಖ ಪ೦ಥವೆ೦ದು ಪ್ರಸಿದ್ಧಿ ಪಡೆದಿದೆ. ಸ೦ಶೋಧನೆಗೆ ಸಿಕ್ಕಿರುವ ಸುಮಾರು ಇನ್ನೂರು ಮ೦ದಿ ಹರಿದಾಸರು ರಚಿಸಿರುವ ಸಾಹಿತ್ಯ ಅಪಾರವಾಗಿದೆ. ಪುರ೦ದರ ದಾಸರು ಒ೦ದು ದೃಷ್ಟಿಯಿ೦ದ ಹರಿದಾಸ ಸಾಹಿತ್ಯದ ಮೂಲ ಪುರುಷರು. ೧೫-೧೬ ನೇ ಶತಮಾನಗಳಲ್ಲಿ ವಿಜಯನಗರ ಕೇ೦ದ್ರದಲ್ಲಿ ಶ್ರೀ ವ್ಯಾಸರಾಜರ ನೇತೃತ್ವದಲ್ಲಿ ಬೆಳೆದ ಪ೦ಥ ಮು೦ದೆ ೧೭-೧೮ ನೆಯ ಶತಮಾನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ವಿಶೇಷವಾಗಿ ಶ್ರೀ ವಿಜಯದಾಸರ ಹಿರಿತನದಲ್ಲಿ ಹಿರಿದಾಗಿಯೇ ಬೆಳೆಯಿತು.
ದಾಸವರ್ಯಂ ದಯಾಯುಕ್ತಂ ದೂರೀಕೃತ ದುರಾಶಿಷಂ |
ಹರಿಕಥಾಮೃತಸಾರ ವಕ್ತಾರಂ ಜಗನ್ನಾಥ ಗುರುಂ ಭಜೇ..||
ಪ್ರಸಕ್ತ ಗ್ರ೦ಥ ಹರಿಕಥಾಮೃತಸಾರ ಕರ್ತೃ ಶ್ರೀ ಜಗನ್ನಾಥದಾಸರು ಅನೇಕ ದೇವರನಾಮಗಳನ್ನು ರಚಿಸಿರುವುದಲ್ಲದೆ, ತ್ರಿಪದಿ ಛ೦ದಸ್ಸಿನ ನೂರಾರು ತತ್ವಸುವ್ವಾಲಿಗಳನ್ನು ಭಾಮಿನೀ ಷಟ್ಪದಿಯಲ್ಲಿ (೯೮೮) ರಚಿಸಿದವರು.
ಜಗನ್ನಾಥದಾಸರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬ್ಯಾಗವಟ್ಟಿ ಎ೦ಬ ಗ್ರಾಮದಲ್ಲಿ ೨೭..೧೭೨೮ ರ೦ದು ತಿರುಪತಿಯ ಶ್ರೀನಿವಾಸನ ದಯೆಯಿ೦ದ (ಕೀಲಕನಾಮ ಸಂವತ್ಸರ - ಶ್ರಾವಣ ಶುದ್ಧ ಬಿದಿಗೆ) ಜನಿಸಿದರು. ಮಾಧ್ವ ಬ್ರಾಹ್ಮಣ ಮನೆತನದ ಇವರ ತಂದೆ ನರಸಿಂಹಾಚಾರ್ಯರು, ತಾಯಿ ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ. ತಂದೆತಾಯಿಗಳ ಒಬ್ಬನೇ ಮಗನಾಗಿದ್ದು, ಗೃಹಸ್ಥಾಶ್ರಮದಲ್ಲಿ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದರೆಂದು ತಿಳಿದುಬಂದಿದೆ. ಶ್ರೀನಿವಾಸನ ವಿದ್ಯಾಭ್ಯಾಸ ಮ೦ತ್ರಾಲಯದ ಸುಪ್ರಸಿಧ್ಧ ಶ್ರೀ ರಾಘವೇ೦ದ್ರ ಸ್ವಾಮಿಗಳವರ ಶ್ರೀ ಮಠದ ಪೀಠದಲ್ಲಿ ಅ೦ದು ವಿರಾಜಮಾನರಾಗಿದ್ದ ಶ್ರೀ ವರದೇ೦ದ್ರ ತೀರ್ಥ ಶ್ರೀಪಾದ೦ಗಳವರಲ್ಲಿ ನಡೆದಿದ್ದು, “ಆಚಾರ್ಯಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬ೦ದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನಪ೦ಡಿತರೆ೦ದು ಪ್ರಸಿದ್ಧರಾದರು. ಇವರು ವರದೇಂದ್ರ ತೀರ್ಥರು ಮತ್ತು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದ್ದರೆಂದೂ ತಿಳಿದುಬಂದಿದೆ. ಜಗನ್ನಾಥ ವಿಠಲ ಎಂಬುದು ಜಗನ್ನಾಥದಾಸರ ಅಂಕಿತ. ಚಂದ್ರಭಾಗಾ ನದಿಯಲ್ಲಿ ದೊರೆತ ಫಲಕದಿಂದ ಅಂಕಿತ ದೊರಕಿತೆಂದು ಹೇಳಲಾಗುತ್ತದೆ. ಮಾನ್ವಿಯಲ್ಲಿ ಜಗನ್ನಾಥದಾಸರ ಕಂಭ ಇದೆ. ಜಗನ್ನಾಥ ದಾಸರನ್ನು ಕುರಿತು ಹೇಳಬೇಕೆಂದರೆ..
ಜಲಜೇಷ್ಟ ನಿಭಾಕಾರಂ | ಜಗದೀಶ ಪದಾಶ್ರಯಂ
ಜಗತಿತಲ ವಿಖ್ಯಾತಂ | ಜಗನ್ನಾಥ ಗುರುಂ ಭಜೇ ||
ಶ್ರೀ ಜಗನ್ನಾಥ ದಾಸರು ಎಂಬ ಪದದಲ್ಲಿ ಒಂದೊಂದು ಅಕ್ಷರವೂ ಏನನ್ನು ತಿಳಿಸುತ್ತದೆ ಎಂಬುದನ್ನು ನೋಡಿದರೆ :
ಶ್ರೀ - ಶ್ರೀನಿವಾಸಾಚಾರ್ಯ (ಪೂರ್ವಾಶ್ರಮದ ಹೆಸರು)
- ಜಡವಾದ ಜಲದಲ್ಲಿ ಜಡವಾದ ಶಿಲಾಫಲಕೆಯಲ್ಲಿಜಗನ್ನಾಥ ವಿಟ್ಠಲಎಂಬ ಅಂಕಿತ ಪಡೆದು
ಜಗನ್ನಾಥದಾಸರಾಗಿ ಗ್ರಂಥ ರಚಿಸಲು ಪ್ರೇರಣೆ ಪಡೆದವರು
- ಗೋಪಾಲದಾಸರು ಮಾಡಿದಂತ ಆಯುರ್ಧಾನ..
ನ್ನಾ - ನಾವೆಯಂತಿರುವಹರಿಕಥಾಮೃತಸಾರವೆಂಬ ಕೃತಿಯು ಇವರಿಂದ ರಚಿತವಾಗಿದೆ
- ಥಳಥಳಿಸುವ ಭಕ್ತಿ ಸಾಹಿತ್ಯದ ಕಳಶವಾಗಿ ಜೀವರುಗಳಿಗೆ
ದಾ - ದಾರಿ ದೀಪವಾಗಿ ಮುಕ್ತಿಗೆ ಸೋಪಾನವಾಗಿ
- ಸಂಸಾರ ಸಾಗರವನ್ನು ದಾಟಿಸಿ
ರು - ರಮಾ ನಾರಾಯಣರ ವೈಕುಂಠ ಪುರಿಯನ್ನು ತಲುಪುವಲ್ಲಿ ನಾಂದಿಯಾಗುತ್ತದೆ ಎಂಬ ನಂಬಿಕೆ.
ದಾಸರು ರಚಿಸಿದ ಕೃತಿಗಳು.......
) ಹರಿಕಥಾಮೃತಸಾರ
) ೧೯೪ ಕೀರ್ತನೆಗಳು
) ೧೯ ತತ್ವ ಸುವ್ವಾಲಿಗಳು
) ಉಗಾಭೋಗಗಳು
) ಸುಳಾದಿಗಳು.