Sunday, March 18, 2012

ವಸಂತಾಗಮನಕ್ಕೆ ಒಂದು ಸಂದೇಶ.... :-)




ಅಂತರ್ಜಾಲದ ಆತ್ಮೀಯ ಮಿತ್ರರಿಗೆಲ್ಲಾ ವಸಂತಾಗಮನದ ಶುಭಾಶಯಗಳು....

ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ನಾವು "ಹರಿಕಥಾಮೃತಸಾರ"  ಗ್ರಂಥದ ಮೊದಲ ಸಂಧಿ, "ಮಂಗಳಾಚರಣ ಸಂಧಿ"ಯನ್ನು ಶ್ರೀಹರಿಯ ಕೃಪೆ ಮತ್ತು ಕರುಣೆಯಿಂದ ನಮಗೆ ತಿಳಿದಷ್ಟು, ವಿವರಿಸುವ ಪ್ರಯತ್ನ ಮಾಡಿದ್ದೆವು.  ಮೊದಲ ಸಂಧಿಯ ವಿವರಣೆ .. ಮುಗಿದಿದ್ದು ಈಗ  ನಾವು ಹರಿಕಥಾಮೃತಸಾರ ಗ್ರಂಥದ ಎರಡನೆಯ ಸಂಧಿಯಾದ "ಕರುಣಾ ಸಂಧಿ"ಯನ್ನು ಪ್ರಾರಂಭಿಸುತ್ತಿದ್ದೇವೆ.  ಹೊಸ ಸಂವತ್ಸರದ ಆರಂಭದೊಂದಿಗೇ ನಮ್ಮ ಕೆಲಸವೂ ಮುಂದುವರೆಯಲಿದೆ.   ಸಧ್ಯದಲ್ಲೇ ಪ್ರಾರಂಭವಾಗುವ ಕರುಣಾ ಸಂಧಿಯ ವಿವರಣೆಯನ್ನೂ ತಾವುಗಳು ಓದಲು ಬರುವಿರಲ್ಲವೇ....

ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.... ನೂತನ ವರ್ಷಾರಂಭವನ್ನು ನಮ್ಮ ಹರಿಕಥಾಮೃತಸಾರ ತಿಳಿಯುವ ಪ್ರಯತ್ನ ಮಾಡುತ್ತಾ ಅನವರತವೂ ಹರಿಯ ಧ್ಯಾನವನ್ನು ಮಾಡೋಣ ಬನ್ನಿ.

ಕರುಣಾಸಂಧಿಗೆ ಒಂದು ಚಿಕ್ಕ ಮುನ್ನುಡಿಯ ಬರಹದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ...

ಸತ್ಯವತಿ
ಅನಂತ್ ರಾಜ್
ಶ್ಯಾಮಲಾ